Pages

Monday, November 21, 2011

ಎರಡು ದಿನ... ಮತ್ತೆ ಬಾಲಕನಾಗಿ ನನ್ನ ಶಾಲೆಯಲ್ಲಿ !


ಮಾನವಿ"ಯತೆಯ ರಜತ ಮಹೋತ್ಸವದ ಮುನ್ನುಡಿ.

ತಲೆ ಬರಹದಷ್ಟೇ ಅರ್ಥಪೂರ್ಣ ಅಲ್ಲಿ ನಡೆದ ಸಮಾರಂಭ.(ನಡೆದ  ಅನ್ನುವುದಕ್ಕಿಂತ .. ವಿಜ್ರಂಭಿಸಿದ ಅನ್ನುವುದೆ ಹೆಚ್ಚು ಸೂಕ್ತ).
ಮಾನವಿ (ಮಾವಿನಕೆರೆ ನವೋದಯ ವಿದ್ಯಾಲಯ)ದ ಪೂರ್ವ ವಿದ್ಯಾರ್ಥಿಗಳ ಕಾರ್ಯಕ್ರಮ.. ಪೂರ್ವಿ ಹೊಂಬಾಳೆ ೨೦೧೧.
ಬಹಳ ದಿನಗಳಿಂದ ನೀರಿಕ್ಷಿಸುತಿದ್ದ ದಿನ ಒಂದೇ ಹೋಯಿತು ಎಂದು ತುರಾತುರಿಯಲ್ಲಿ  ಹಿರಿಯ ವಿದ್ಯಾರ್ಥಿಗಳು (ಪ್ರತ್ಯೇಕವಾಗಿ ಸ್ವಂಸೇವಕರು) ಲಗು ಬಗೆಯಿಂದ ಕಾರ್ಯಮಗ್ನರಾಗಿದ್ದರು. " ಎಂದೂ ರಾಜೋತ್ಸವದ ಮಾಸದಲ್ಲಿ ಮಾಸದ ಪೂರ್ವ ವಿದ್ಯಾರ್ಥಿಗಳ ಸಮಾವೇಶ ಪ್ರಪ್ರಥಮವಾಗಿ ನಡೆದಿದ್ದು ಇದೇ ನವೆಂಬರ್ ೧೨, ೧೩ರಂದು, ಕಾರಣ ಇತ್ತಿಚೀಗೆ ಹೊರಹೊಮ್ಮಿದ ವಿದ್ಯಾರ್ಥಿಗಳ ಪರೀಕ್ಷೇಗಳಿಗೆ ತೊಂದರೆಯಾಗಬಾರದೆಂಬ ಸಮಯೋಚಿತ ಒಕ್ಕೊರಲಿನ ತೀರ್ಮಾನ.

ವಿದ್ಯಾಲಯವು ರಜತ ಮಹೋತ್ಸವದತ್ತ ಅಡಿಯಿಡುತ್ತಿರಲು, ಅದರ ಆರಂಭಾಚರಣೆಗಳ ಆಚರಿಸಲು.., ಶನಿವಾರ ಮಂಜಾನೆಯ ಚುಮು ಚುಮು ಚಳಿಯಲ್ಲಿಯೇ ಭೂಮಂಡಲದ ಮೂಲೆ ಮೂಲೆಯಲ್ಲಿಂದ( ಕೆಲವರು.. ಮಿಕ್ಕವರು ನಮ್ಮ ಕನ್ನಡನಾಡಿನಿಂದಾನೆ) ಚಿಟ್ಟೆಗಳಂತೆ ಹಾರಿ ಬಂದು  ಮಾವಿನಕೆರೆಯ ಸುಮಾರು ಮುವತ್ಮೂರು ಎಕರೆ ಶಾಲೆಯ ಆವರಣವನ್ನು  ಸಿಂಗರಿಸಿದರು. (ವಿಶೇಷವೆನೇಂದರೆ ಸುಮಾರು ಚಿಟ್ಟೆಗಳ ಬಣ್ಣವೆಲ್ಲ ಒಂದೇ.. ಆಯಿತು ಭಾನುವರದಂದು)

ಪ್ರಸಕ್ತ ಶಾಲೆಯ ವಿದ್ಯಾರ್ಥಿಗಳಿಗೆ ವ್ರುತ್ತಿ ಶಿಕ್ಷಣ, ಉದ್ಯೋಗಾವಕಾಶದ ಕುರಿತು ಮಾರ್ಗದರ್ಶನ ಮತ್ತು ಎಳೆಯರಲ್ಲಿ ಕ್ರಿಯಶೀಲತೆ ಮೂಡಿಸುವ ಚಿತ್ರ ಸಂಗ್ರಹ ಜೋಡಣೆ, ವೈದ್ಯಕಿಯ ತಪಾಸಣೆ ಹೀಗೆ ಇತ್ಯಾದಿ ಉಪಯುಕ್ತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಹಳೇ ವಿದ್ಯಾರ್ಥಿಗಳಿಗೆಂದೇ ಕ್ರೀಡಾಸ್ಪರ್ದೆ, ಪ್ರತಿ ಸ್ಪರ್ದೆಯಲ್ಲೂ ಭಾಗವಹಿಸುವವರ ಸಂಖ್ಯೆ ಹೇರಳವಾಗಿಯೇ ಇತ್ತು. ಹಳೇ ವಿದ್ಯಾರ್ಥಿಗಳು ತಮ್ಮ ಯುವಕ/ಯುವತಿರೆಂಬ ಪಟ್ಟ ಕಳೆದುಕೊಳ್ಳುವ್ ಹೊಸ್ತಿಲಲ್ಲಿದ್ದವರು, ಕೆಲವರು ಕಳೆದುಕೊಂಡು( ಆಂಟಿ/ಅಂಕಲ್) ಮದ್ಯ ವಯಸ್ಕರಾಗಿದ್ದರೂ ತಮ್ಮಲ್ಲಿರುವ ಕ್ರೀಡೆ ಮಾಸಿಲ್ಲವೆಂದು ತೊರ್ಪಡಿಸಿದ್ದು ಉಲ್ಲೇಖನಿಯ.

ಸಂಜೆ ರಸಸಂಜೆಯಗಿದ್ದು ರಸಪ್ರಶ್ನೆ ಕಾರ್ಯಕ್ರಮದ ಕಾರುಬಾರಿನಿಂದಲೇ, ಅಂತೂ ಇಂತೂ ಎಂ. ಪಿ ಹಾಲ್ ನಲ್ಲಿ ಕೌನ್ ಬನೇಗಾ ಕರೋಡ್ ಪತಿಯ ವಾತಾವರಣ ಸುಳಿದಾಡಿತು. ಚಿಣ್ಣರು ನಾಮುಂದು ತಾಮುಂದೆಂದು ಹುಮ್ಮಸಿನಿಂದ ಉತ್ತರಿಸಿ ಚಾಕೊಲೇಟ್ ಅನ್ನು ಗೆದ್ದು ಸಂಭ್ರಮಿಸಿದರು.
 ಆಡಿ ದಣಿದಿದ್ದ ವಿದ್ಯಾರ್ಥಿಗಳಿಗೆ ರಾತ್ರಿಯ ಬಾರಿ ಭೋಜನ ಸಿದ್ದವಾಗಿತ್ತು. ಭೋಜನದ ನಂತರ ಅತಿ ಹಿರಿಯ ವಿದ್ಯಾರ್ಥಿಗಳು ಸುಮಾರು ಎಳು ವರ್ಷಗಳ ಕಾಲ ಪ್ರತಿದಿನವೂ ದಿಟ್ಟಿಸುತ್ತಿದ್ದ ಹಳೇಕೋಟೆ ಬೆಟ್ಟ್ದ ಇರುಳು ಪ್ರಯಾಣದ ಪರಿಚಯಕ್ಕೆ ಹೊರಟರು.
ಮತ್ತೊಂದು ಗುಂಪು ಹಳೇ ವಿದ್ಯಾರ್ಥಿಗಳಲ್ಲಿ ಕಿರಿಯರು ಹೆಚ್ಚು ಕಡಿಮೆ ನಗೆ ಹಬ್ಬವನ್ನೆ ಮಾಡಿದರು, ಚಂದಮಾಮ ಆಗಸಕ್ಕೇರಿದರೂ.. ಮಂಜಾನೆಯ ಮಂಜಿನಲ್ಲಿ ಹಕ್ಕಿಗಳ ಚಿಲಿಪಿಲಿಯಂತೆ ಚಿಟಗುಡುತ್ತ ಚಿಗರೆಗಳಂತೇ ಕುಣಿದು ಕುಪ್ಪಳಿಸಿದರು.

 ಶನಿವಾರ ಮುಗಿದು ಭಾನುವಾರ ತಿಳಿದಿದ್ದು... "ಕಣ್ ಬಿಡುವುದಕ್ಕೂ ಮುನ್ನ ನೀಡಿದ ಚಹ ಸವಿದ ಮೇಲೆಯೇ... ಅದ್ ನಿಜಕ್ಕೂ ಅವಿಸ್ಮರಣೀಯ"...
ತಿಂಡಿಗೂ ಮುನ್ನ... ಆಟ.. ಕೆಲವರು ಈಜಾಟ ... (ಮತ್ತೆ  ಸಿಗದ ಬಾಲ್ಯದಂತೆ)...
ಆಗಲೇ ಶಾಲೆಯ ಆವರಣದಲ್ಲಿ ಸಂಭ್ರಮದ ಚಾಯೆ ಆವರಿಸಿತ್ತು., ಶಾಲೆಯ ಸಂಸ್ಥಾಪಕ ಪ್ರಾಂಶುಪಾಲರು ಹಾಗೂ ನೆಚ್ಚಿನ ಗುರುಗಳಾದ ಶ್ಯಾಮಲ ಮೇಡಮ್, ಶರಣಪ್ಪ ಸರ್, ಬಸವರಾಜ್ ಸರ್  ಆಗಮಸಿದ್ದು ಎಲ್ಲರಿಗೂ ಅತೀವ ಸಂತೋಷವಾಗಿತ್ತು. ವಿದ್ಯಾಲಯದ ಪ್ರಾಂಶುಪಾಲರಿಗೆ ಮತ್ತು ಭೋಧಕವರ್ಗ, ಭೋಧಕೇತರ ವರ್ಗದವರಿಗೆಲ್ಲಾ ಅನಂತಪೂರ್ವ ಧನ್ಯವಾದಗಳನ್ನು ಸಲ್ಲಿಸಲೇಬೇಕು ಅವರ ಸಾಂದರ್ಭಿಕ ಸಹಾಯ ಹಾಗೂ ಅದ್ಭುತ ಒಡನಾಟಕ್ಕೆ.
ಪುಟಾಣಿ ಬಾಲೆಯರ ನ್ರುತ್ಯ, ವೀರಗಾಸೆ, ಮೈನವಿರೆಳಿಸುವ ದೀಪ ನರ್ತನ ಎಲ್ಲರ ಕಂಗಳ ಮುದ ನೀಡಿದವು.

ಮದ್ಯಾಹ್ನದ ಎಲ್ಲರ ಅಚ್ಚು ಮೆಚ್ಚಿನ ಪುಳಿಯೋಗರೆ ಹೊಟ್ಟೆ ಸೇರಿದ ನಂತರ ಮೀಸಲಾಗಿದ್ದು.. ಕ್ಯಾಮರ ಕಣ್ಣಿಗೆ. ಎಲ್ಲರೂ ಗುಂಪು ಗುಂಪಾಗಿ ಸಹಪಾಠಿ ಮಿತ್ರರೊಂದಿಗೆ ನೆಚ್ಚಿನ ಗುರುಗಳೊಂದಿಗೆ ಕ್ಯಾಮರ ರೆಪ್ಪೆಯ ಮಿಟಿಗಿಸಿದ್ದೋ ಮಿಟಿಗಿಸಿದ್ದು. ಹೀಗೆ ಎರಡು ದಿನದ ಸುದೀರ್ಘ ಕ್ಷಣಗಳು ಕ್ಷಿಣಿಸಿ ಹಿಂದಿರುಗುವ ಕ್ಷಣಗಣನೆ ಪ್ರಾರಂಭವಾದಗ ಎಲ್ಲರೂ ಒಲ್ಲದ ಮನಸ್ಸಿನಿಂದ ಭಾರವಾದ ಹ್ರುದಯದಲ್ಲಿ ವಿದಾಯ ಹೇಳಿ ಹೋರಡತೊಡಗಿದರು.

ಹಾಗೆ ಶಾಲೆಯ ಮೇಲೆ ಅನುರಾಗ, ಭವ್ಯ ಪ್ರಣಯವಿಟ್ಟು ರಜತ ಮಹೋತ್ಸವಕ್ಕೆ ಒಡೋಡಿ ಬನ್ನಿ ಎಂದು ಕರೆದು...
ಮರಳಿ ಬಂದಾಯ್ತು.. ಹಳೇ ಜೀವನಕ್ಕೆ (ವಾಸ್ತವಕ್ಕೆ).

No comments:

Post a Comment